ಮಂಗಳವಾರ, ನವೆಂಬರ್ 4, 2008

The Power of Dreams

Do the dreams have any meaning to our lives. Of course they do have.

Recently I watched a small video about "The Art of Remembering and Interpreting Dreams". The presenter was Dr. Judith Orloff. You can find more info about her on http://www.drjudithorloff.com/. In that video she was explaining about the dreams and their interpretation. I was excited and doubted. I wanted to give it a try on my own life. During that time, one problem was annoying us in our project. We were fed up in solving that problem. That day before going to bed, I put it across my problem to subconscious mind. Surprisingly, I got an answer in the form of dream. In dream it was clear that the problem lies somewhere else. Still I didn't believe that. But when we solved the problem, I was amazed. It was true. The problem was somewhere else.

You can watch this video. More videos from the doctor are available at http://www.youtube.com/user/judithorloffmd.


I tried like this. Before going to bed, relaxed myself. I was saying myself that I will get the solution to my problem in the form of dream. I can write it vividly, when I wake up in the morning. Repeated the previous steps. I was amazed at the way the dreams work.

ಸೋಮವಾರ, ನವೆಂಬರ್ 3, 2008

ದಕ್ಷಿಣ ಕೊರಿಯಾದ ಸುವಾನ್ ನಗರದಲ್ಲಿ ೫೩ನೇ ಕರ್ನಾಟಕ ರಾಜ್ಯೋತ್ಸವ

ಈ ಬಾರಿ "ಕರ್ನಾಟಕ ರಾಜ್ಯೋತ್ಸವ"ವನ್ನು ದಕ್ಷಿಣ ಕೊರಿಯಾದ ಸುವಾನ್ ನಗರದಲ್ಲಿ ಆಚರಣೆ ಮಾಡಿದೆವು. ನನಗೆ ನೆನಪು ಇರುವ ಹಾಗೆ ನಾನು ಆಚರಿಸಿದ ಮೊದಲನೆಯ "ಕನ್ನಡ ರಾಜ್ಯೋತ್ಸವ". ಶಾಲೆಯಲ್ಲಾಗಲೀ/ಕಾಲೇಜ್ ನಲ್ಲಾಗಲೀ ರಾಜ್ಯೋತ್ಸವ ಆಚರಿಸಿದ ನೆನಪಿಲ್ಲ. ಈ ಬಾರಿಯ ಕನ್ನಡ ರಾಜ್ಯೋತ್ಸವ ವಿಶೇಷವಾದದ್ದು. ಯಾಕೆಂದರೆ ನಮ್ಮ ಮಾತೃಭಾಷೆ ಕನ್ನಡಕ್ಕೆ "ಶಾಸ್ತ್ರೀಯ ಸ್ಥಾನಮಾನ" ಸಿಕ್ಕಿದಂತಹ ಸುಸಂದರ್ಭ.

ಸುವಾನ್ ನಗರದಲ್ಲಿ ಎಲ್ಲಾ ಕನ್ನಡಿಗರು ಹಾಗೂ ಇತರ ಸ್ನೇಹಿತರು ಕೂಡಿಕೊಂಡು ೫೩ನೆಯ ಕನ್ನಡ ರಾಜ್ಯೋತ್ಸವವನ್ನು ತುಂಬಾ ಸಡಗರ, ಸಂಭ್ರಮ ಹಾಗು ಸರಳವಾಗಿ ಆಚರಿಸಿದೆವು. ನನ್ನ ಗೆಳೆಯ ವಿಜಯ್ ತಮ್ಮ ಬ್ಲಾಗ್ ನಲ್ಲಿ ಈ ಆಚರಣೆಯನ್ನು ತುಂಬಾ ಚೆನ್ನಾಗಿ ವರ್ಣಿಸಿದ್ದಾರೆ. ಅವರ ಬ್ಲಾಗ್ ತಲುಪಲು ಈ ಲಿಂಕನ್ನು ಕ್ಲಿಕ್ಕಿಸಿ http://sheelavantar.blogspot.com/. ರಾಜ್ಯೋತ್ಸವದ ದೃಶ್ಯಾವಳಿಯನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದು.


ನಾವೆಲ್ಲರೂ ಒಗ್ಗಟ್ಟಾಗಿ ಸೇರಿಕೊಂಡು ಆಚರಿಸಿದ್ದು ನನಗೆ ತುಂಬಾ ಖುಷಿಯಾಯ್ತು. ನಾವಷ್ಟೇ ಅಲ್ಲ ಎಲ್ಲಾ ಕನ್ನಡಿಗರೂ ಸಹ ಒಗ್ಗಟ್ಟಾಗಿರಬೇಕು ಅನ್ನೋದು ನನ್ನ ಹೆಬ್ಬಯಕೆ. ಯಾಕೆಂದರೆ ಕನ್ನಡಿಗರು ಯಾವುದೋ ಸಂಭ್ರಮದಲ್ಲಿ/ಸಂಕಷ್ಟದಲ್ಲಿರುವಾಗ ಒಗ್ಗಟ್ಟಾಗೋದು ದೊಡ್ಡದಲ್ಲ, ಎಲ್ಲಾ ಸಮಯದಲ್ಲಿ ಒಗ್ಗಟ್ಟಾಗಿರಬೇಕು. ಒಂದು ಉದಾಹರಣೆ ಹೇಳ್ತೀನಿ. IT Companyಗಳನ್ನು ತಗೊಂಡರೆ ಪರ ರಾಜ್ಯದವರು ಅವರ ಕಡೆಯವರಿಗೆ ಬಹಳ Support ಮಾಡ್ತಾರೆ. ಅವರಿಗೆ ಕೆಲಸ ಮಾಡೊಕ್ಕೆ ಬರುತ್ತಾ ಬಿಡುತ್ತಾ ಗೊತ್ತಿಲ್ಲ, ಅವರನ್ನು ಕೆಲಸಕ್ಕೆ ತಗೊಳ್ತಾರೆ. ಇದು IT Companyಗಳಿಗೆ ಮಾತ್ರ ಮೀಸಲಾಗಿಲ್ಲ, ಎಲ್ಲಾ ಕಡೆ ಇರೋದೆ.

ಇನ್ನು ಮೇಲಾದರು ನಾವೆಲ್ಲ ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಒಗ್ಗಟ್ಟಾಗಿರೊಣ.

ಜೈ ಕನ್ನಡಾಂಬೆ, ಜೈ ಭುವನೇಶ್ವರಿ.

ಸೋಮವಾರ, ಅಕ್ಟೋಬರ್ 13, 2008

ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು

ನಾವು ಪ್ರತಿದಿನ ಪತ್ರಿಕೆಗಳನ್ನು ಓದುತ್ತೀವಿ, T.V. ನೋಡುತ್ತೀವಿ, ಪುಸ್ತಕ ಓದುತ್ತೀವಿ. ನಾವು ತಕ್ಷಣ ಓದಿದ್ದನ್ನು, ನೋಡಿದ್ದನ್ನು ನಿಜ ಅಂದುಕೊಳ್ತೀವಿ. ಆದರೆ ಬೆಳ್ಳಗಿರೊದೆಲ್ಲಾ ಹಾಲಲ್ಲ. ನಮ್ಮ ಮನಸ್ಸೇ ಹಾಗೇ, ಅದನ್ನೆಲ್ಲಾ ನಂಬುತ್ತೀವಿ. ಯಾಕೆಂದರೆ ಮಾದ್ಯಮ ಅಷ್ಟೊಂದು ಪ್ರಭಾವಶಾಲಿಯಾಗಿದೆ. ನಮ್ಮನ್ನೆಲ್ಲಾ ತನ್ನ ಕಡೆ ಸೆಳೆದುಕೊಂಡಿದೆ. ಆದರೆ ನಾವು ಓದಿದ, ನೋಡಿದ ಎಲ್ಲಾ ವಿಷಯ ನಿಜ ಆಗಿರೊದಿಲ್ಲ.

ಆದರೆ "ಪ್ರತ್ಯಕ್ಷವಿದ್ದರೂ ಪ್ರಮಾಣ ಮಾಡಿ ನೋಡು" ಅಂಥ ಗಾದೆ ಇದೆ. ಏನೇ ಆಗಲಿ ನಂಬೊದಕ್ಕಿಂತ ಒಂದು ಸಾರಿ ವಿಚಾರ ಮಾಡಬೇಕು ಅನ್ನೋದೆ ಇದರ ಅರ್ಥ.

ಇತ್ತೀಚೆಗೆ ಒಂದು ಕನ್ನಡ ಚಾನೆಲ್ ನಲ್ಲಿ ಯಾವುದೋ ವಿಷಯದ ಬಗ್ಗೆ ಚರ್ಚೆ ಮಾಡ್ತಾ ಇದ್ದರು. ಮೂರು-ನಾಲ್ಕು ದಿವಸ ಪ್ರಸಾರನೂ ಮಾಡಿದರು. ಆದರೆ ಐದನೆಯ ದಿವಸ ಗೊತ್ತಾತು, ಅದು ಸುಳ್ಳು ಅಂಥ. ಪತ್ರಿಕಾ ಸ್ವಾತಂತ್ರ್ಯ ಐತೆ ನಿಜ, ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು.

ಮಂಗಳವಾರ, ಅಕ್ಟೋಬರ್ 7, 2008

ಎಲ್ಲಾ ಹಣಕ್ಕಾಗಿ

ನಮ್ಮ ರಾಜ್ಯದ ರಾಜಕೀಯ ನೋಡಿದರೆ, ಎಲ್ಲಾ ಹಣಕ್ಕಾಗಿ ಇದ್ದಾರೇನೊ ಅನ್ನಿಸ್ತದೆ. ಅನ್ನಿಸ್ತದೆ ಏನು, ಅದೇ Fact. ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅಂಥ ಕೇಳಿಲ್ವ? ರಾಜಕೀಯಕ್ಕೆ ಎನು ಮೀಸಲಾಗಿಲ್ಲ ಇದು, ಎಲ್ಲಾ ಕ್ಷೇತ್ರದಲ್ಲೂ ಇದೇ ಕಥೆ. ಆದರೆ ರಾಜಕೀಯದ ಮಂದಿಗಳು ಇದರಲ್ಲಿ ಒಂದು ಕೈ ಮುಂದೆ.

ಪ್ರಜಾರಾಜ್ಯ ಅಂತಾರೆ, ಪ್ರಜೆಗಳಿಗೆ ಅವರ ನಾಯಕನನ್ನು ಆರಿಸೊಕ್ಕೆ ಮಾತ್ರ ಹಕ್ಕು ಇದೆ. ಆದರೆ ಅವನನ್ನು ನಾಯಕ ಸ್ಥಾನದಿಂದ ಕೆಳಗೆ ಇಳಿಸೊ ಹಕ್ಕಿಲ್ಲ. Why? ನನಗಂತೂ ಗೊತ್ತಿಲ್ಲ. ಇಲ್ಲಿ ನಾಯಕರಾಗಿ ಬರೊ ಮಂದಿಯಲ್ಲಿ, ಸುಮಾರು ಜನ ಜೇಬು ತುಂಬಿಸಿಕೊಂಡೇ ಹೋಗ್ತಾರೆ? ಯಾಕೆಂದರೆ, ನಾಯಕರಾಗೊದಕ್ಕೆ ಜೇಬು ಖಾಲಿಯಾಗಿರುತ್ತೆ ನೋಡಿ ಅದಕ್ಕೆ. ಮತದಾರರನ್ನು ಕೊಂಡುಕೊಳ್ಳುತ್ತಾರೆ. ಒಬ್ಬ ಸಾಮಾನ್ಯ ಮತದಾರ ಕೂಡ ಅವನನ್ನೇ ಮಾರಿಕೊಂಡು ಬಿಡ್ತಾನೆ. ಎಲ್ಲಾ ಹಣಕ್ಕೋಸ್ಕರ.

ಹಣ ಗಳಿಸಿರಿ, ಆದರೆ ಒಳ್ಳೆ ಮಾರ್ಗದಿಂದ ಗಳಿಸಿ. ಬಸವಣ್ಣನವರು ಹೇಳ್ತಾರೆ "ಕಾಯಕವೇ ಕೈಲಾಸ" ಎಂದು. ಕಾಯಕವನ್ನು ಒಳ್ಳೆ ದೃಷ್ಟಿಯಿಂದ ನೋಡಿ. ಯಾಕಂದರೆ ಎಲ್ಲಾರು ಮಾಡೊದು ಕಾಯಕವೇ.