ಶನಿವಾರ, ಅಕ್ಟೋಬರ್ 4, 2008

ನಮ್ಮ ಶಿಕ್ಷಣ ಶಿಕ್ಷೆಯಾ?

ನಮ್ಮ ಮೂಲಭೂತ ಶಿಕ್ಷಣ ಸರಿಯಾಗಿದೆಯಾ ಎಂದು ಒಂದು ಪ್ರಶ್ನೆ ಕೇಳಿಕೊಳ್ಳಿ. The answer is NO.

ನಮ್ಮ ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ ಎದುರಿಸುವುದು ಹೇಗೆ? ಏನಾದರೂ ಸಮಸ್ಯೆಗೆ ಬಂದಾಗ ಆತ್ಮವಿಶ್ವಾಸದಿಂದ ಎದುರಿಸುವುದು ಹೇಗೆ? ನಾಯಕತ್ವದ ಗುಣಗಳನ್ನು ಕಲಿಸಿಕೊಡುತ್ತಾ?. ಇಲ್ಲ.

ಈಗ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನೇ ತಗೊಳ್ಳಿ, ಯಾವುದಾದರೂ ನಗರಕ್ಕೆ ಬಂದಾಗ ಅಲ್ಲಿಯ ಪರಿಸ್ಥಿತಿಯನ್ನು Immediate ಆಗಿ ಎದುರಿಸಕ್ಕೆ ಆಗಲ್ಲ. ಹೊಸ ಜನಗಳ ಹತ್ತಿರ ವ್ಯವಹಾರ ಮಾಡೊದು ಬಹಳ ಕಷ್ಟ ಆಗುತ್ತೆ. ಇಪ್ಪತ್ತು ಜನದ ಮುಂದೆ ಏನಾದರು ಮಾತನಾಡಬೇಕು ಅಂದ್ರೆ ಆಗಲ್ಲ. ಯಾಕೆಂದರೆ ಅವರಿಗೆ ನಾಯಕತ್ವದ ಗುಣಗಳು ಆಗಲಿ, ಅಷ್ಟೊಂದು ಆತ್ಮವಿಶ್ವಾಸ ಆಗಲಿ ಇರೊದಿಲ್ಲ. ಕೆಲವರು ಮಾತ್ರ ಇಂತಹ ಪ್ರಸಂಗಳನ್ನು ಎದುರಿಸಬಲ್ಲರು. ಆದರೆ ಅವರು ಅದನ್ನು ನಮ್ಮ ಶಿಕ್ಷಣದ ಮೂಲಕ ಕಲಿತಿರೊದಿಲ್ಲ.

ಇದಕ್ಕೆ ಏನ್ ಮಾಡಬೇಕು? ನಮ್ಮ ಮೂಲಭೂತ ಶಿಕ್ಷಣವನ್ನೇ ಬದಲಾಯಿಸಬೇಕು. ನವ ಭಾರತವನ್ನು ಕಟ್ಟುವಂಥ ಪಡೆಯನ್ನು ರೂಪಿಸುವಂಥಹ ಶಿಕ್ಷಣವನ್ನು ನೀಡಬೇಕು. ಈಗಿರುವ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನವನ್ನು ಎದುರಿಸೊದಕ್ಕೆ ಆತ್ಮವಿಶ್ವಾಸ, ಧೈರ್ಯ, ಸ್ಥೈರ್ಯಗಳನ್ನು ಕಲಿಸಿಕೊಟ್ಟರೆ, ಅವರು ಮುಂದೆ ಎಂಥ ಸವಾಲನ್ನಾದರನ್ನು ಎದುರಿಸುತ್ತಾರೆ.

ಕಾಮೆಂಟ್‌ಗಳಿಲ್ಲ: