ನಮ್ಮ ರಾಜ್ಯದ ರಾಜಕೀಯ ನೋಡಿದರೆ, ಎಲ್ಲಾ ಹಣಕ್ಕಾಗಿ ಇದ್ದಾರೇನೊ ಅನ್ನಿಸ್ತದೆ. ಅನ್ನಿಸ್ತದೆ ಏನು, ಅದೇ Fact. ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತೆ ಅಂಥ ಕೇಳಿಲ್ವ? ರಾಜಕೀಯಕ್ಕೆ ಎನು ಮೀಸಲಾಗಿಲ್ಲ ಇದು, ಎಲ್ಲಾ ಕ್ಷೇತ್ರದಲ್ಲೂ ಇದೇ ಕಥೆ. ಆದರೆ ರಾಜಕೀಯದ ಮಂದಿಗಳು ಇದರಲ್ಲಿ ಒಂದು ಕೈ ಮುಂದೆ.
ಪ್ರಜಾರಾಜ್ಯ ಅಂತಾರೆ, ಪ್ರಜೆಗಳಿಗೆ ಅವರ ನಾಯಕನನ್ನು ಆರಿಸೊಕ್ಕೆ ಮಾತ್ರ ಹಕ್ಕು ಇದೆ. ಆದರೆ ಅವನನ್ನು ನಾಯಕ ಸ್ಥಾನದಿಂದ ಕೆಳಗೆ ಇಳಿಸೊ ಹಕ್ಕಿಲ್ಲ. Why? ನನಗಂತೂ ಗೊತ್ತಿಲ್ಲ. ಇಲ್ಲಿ ನಾಯಕರಾಗಿ ಬರೊ ಮಂದಿಯಲ್ಲಿ, ಸುಮಾರು ಜನ ಜೇಬು ತುಂಬಿಸಿಕೊಂಡೇ ಹೋಗ್ತಾರೆ? ಯಾಕೆಂದರೆ, ನಾಯಕರಾಗೊದಕ್ಕೆ ಜೇಬು ಖಾಲಿಯಾಗಿರುತ್ತೆ ನೋಡಿ ಅದಕ್ಕೆ. ಮತದಾರರನ್ನು ಕೊಂಡುಕೊಳ್ಳುತ್ತಾರೆ. ಒಬ್ಬ ಸಾಮಾನ್ಯ ಮತದಾರ ಕೂಡ ಅವನನ್ನೇ ಮಾರಿಕೊಂಡು ಬಿಡ್ತಾನೆ. ಎಲ್ಲಾ ಹಣಕ್ಕೋಸ್ಕರ.
ಹಣ ಗಳಿಸಿರಿ, ಆದರೆ ಒಳ್ಳೆ ಮಾರ್ಗದಿಂದ ಗಳಿಸಿ. ಬಸವಣ್ಣನವರು ಹೇಳ್ತಾರೆ "ಕಾಯಕವೇ ಕೈಲಾಸ" ಎಂದು. ಕಾಯಕವನ್ನು ಒಳ್ಳೆ ದೃಷ್ಟಿಯಿಂದ ನೋಡಿ. ಯಾಕಂದರೆ ಎಲ್ಲಾರು ಮಾಡೊದು ಕಾಯಕವೇ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ