ಯಾವುದೇ ಪತ್ರಿಕೆ ಅಥವಾ ನ್ಯೂಸ್ ಚಾನೆಲ್ ನೋಡಿದರೆ ಎಲ್ಲಾದರೂ ಒಂದು ಕಡೆ ಬಾಂಬ್ ಸ್ಫೋಟದ ಸುದ್ದಿ ಸಿಗುತ್ತೆ. ಬಾಂಬ್ ಸಿಡಿಸೋದು ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಿದಂಗೆ ಹಾಗ್ತಾ ಇದೆ. ಯಾಕೆ? ಬಾಂಬ್ ಸಿಡಿಸಿ ಜನ ಕೊಲ್ಲೋದರಿಂದ ಏನ್ ಸಾಧಿಸ್ತಾರೆ? Nothing.
ಯಾಕೆ ಜನ ಬೇರೆಯವರನ್ನು ತಮ್ಮ ತರಹ ಎಂದು ಯೋಚನೆ ಮಾಡಲ್ಲ. ಬಾಂಬ್ ಹಾಕುವುದರಿಂದ ಏನ್ ಅಗುತ್ತೆ? ಸ್ವಲ್ಪ ಜನ ಸಾಯ್ತರೆ, ಕೆಲವರು ಗಾಯಗೊಳ್ಳುತ್ತಾರೆ. That's all. Nothing more happens.
ಬಾಂಬ್ ಹಾಕಿದರೆ ಯಾವುದೋ ಒಂದು ಧರ್ಮ ನಾಶ ಆಗಲ್ಲ, ಇನ್ನೊಂದು ಧರ್ಮ ಬೆಳೆಯೋದಿಲ್ಲ. ಮಾನವ ಧರ್ಮ ನಾಶ ಅಗುತ್ತೆ, ರಾಕ್ಷಸ ಧರ್ಮ ತಾಂಡವವಾಡುತ್ತೆ. ಮಾನವೀಯತೆ ಉಳಿಯೊಲ್ಲ. ಅಮಾನವೀಯತೆ ಬೆಳೆಯುತ್ತೆ.
ಎಲ್ಲಾ ಧರ್ಮನೂ ಒಳ್ಳೆದೇನೆ ಹೇಳುತ್ತೆ, ಎಲ್ಲಾ ಮಹಾನುಭವರು ಒಳ್ಳೆ ಭೋದನೆನೇ ಮಾಡಿದ್ದಾರೆ. ಆದರೂ ಜನಗಳು ಅರಿತುಕೊಂಡಿಲ್ಲ ಅಂದರೆ ಏನ್ ಮಾಡಕ್ಕೆ ಆಗೊಲ್ಲ.
ಇದೆಲ್ಲ ನೋಡ್ತ ಇದ್ದರೆ ಒಬ್ಬ ಸಾಮಾನ್ಯ ಮನುಷ್ಯ ಎನ್ ಮಾಡ್ತಾನೆ. ಇವೆಲ್ಲ ಸುದ್ದಿ ಕೇಳಿ ಕೇಳಿ ಇದೊಂದು ಜೀವನದ ಭಾಗ ಅನ್ನಿಸಿಬಿಡುತ್ತೆ. ನಾನೇ ನೋಡಿ, Blog ಬರೆದಿದ್ದೀನಿ. ನನ್ನ ಅಭಿಪ್ರಾಯ ಹೇಳ್ತಿದೀನಿ.
ಎಲ್ಲರೂ ತನ್ನಂತೆ ಅಂತ ಭಾವಿಸಿದರೆ, ಈ ಬಾಂಬ್, ಕೊಲೆ, ಯುದ್ಧ, etc... ಏನೂ ಆಗಲ್ಲ. ನಾವೆಲ್ಲಾ ಶಾಂತಿಯುತವಾದ ಪ್ರಪಂಚವನ್ನು ನೋಡಬಹುದು. Come, let's build peaceful WORLD.
ಶುಕ್ರವಾರ, ಅಕ್ಟೋಬರ್ 3, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ